ನಾಡು - ನುಡಿ

ಕನ್ನಡ ನಾಡ ನುಡಿ       

ಭಾಷೆ ಸಂವಾಹನದ ವಾಹಕ. ಅದು ಇಲ್ಲದೆ ಯಾವುದೇ ಒಂದು ಪ್ರಾಣಿ ಸಂವಾಹಿಸಲು ಸಾಧ್ಯವಿಲ್ಲ. ಮಾನವ ಇತರೆ ಪ್ರಾಣಿಗಳಿಗಿಂತ ಭಿನ್ನ ರೀತಿಯ ಸಂವಾಹನದ ಮೂಲಕ ಮತ್ತೊಬ್ಬ ಮಾನವನೊಡನೆ ಸಂವಾಹಿಸಲು ವಿಶಿಷ್ಟವಾದ ಭಾಷೆಗಳನ್ನು ರೂಪಿಸಿಕೊಂಡಿದ್ದಾನೆ. ಭಾಷೆ ಎಂಬುವುದು ಕೇವಲ ಸಂವಾಹನಕ್ಕೆ ಅವಶ್ಯವಾದ ಮಾಧ್ಯಮವೆ ಆದರೂ, ವ್ಯಕ್ತಿಯ ಭಾವನೆಗಳು ಹೊರ ಹೊಮ್ಮಲು ಇರುವ ವಾಹಕವೂ ಸಹ ಆಗಿದೆ. ಪ್ರಪಂಚದಲ್ಲಿ, ಅನೇಕ ಜನರುನಿರ್ದಿಷ್ಟವಾದ ಪ್ರದೇಶದೊಳಗೆ ಒಂದು ನಿರ್ದಿಷ್ಟವಾದ ಭಾಷೆಯ ಮೂಲಕ ದೈನಂದಿನ ಚಟುವಟಿಕೆಗಳಿಗಾಗಿ ಮಾತು, ಬರಹಗಳ ಮೂಲಕ ವ್ಯವಹರಿಸುತ್ತಿದ್ದಾರೆ. ಇಂತಹ ಭಾಷೆಗಳಲ್ಲಿ ಕನ್ನಡವೂ ಸಹ ಒಂದು.
ನಾಡುಎಂದರೆ, ಒಂದು ಬೌಗೋಳಿಕ ಸೀಮೆ ಎಂದು. ನುಡಿಎಂದರೆ, ಅಭಿವ್ಯಕ್ತಿಗೆ, ಹಾಗುತನ್ನಂತಿರುವ ಜೀವಿಯೊಡನೆ ಸಂವಾಹನಕ್ಕಾಗಿ ಬಳಸುವ ಮಾಧ್ಯಮ ಎಂದು. ಇಂತಹ ಮಾಧ್ಯಮಗಳಲ್ಲಿ ಒಂದು ದ್ರಾವಿಡ ಭಾಷೆಗಳಲ್ಲಿ ಬಹಳ ಹಳೆಯದರಲ್ಲಿ ಒಂದಾದ ಕನ್ನಡ ಭಾಷೆ. ಇಂದು ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡುನುಡಿಯಾಗಿ ಬಳಸುತ್ತಿದ್ದಾರೆ.
ನಮ್ಮ ಕನ್ನಡಭಾಷೆಯು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಒಂದು ಬೌಗೋಳಿಕ ಎಲ್ಲೆಯೊಳಗೆ ಜನರು ಹೊಂದಿರುವ ಸಂಸ್ಕೃತಿ ಉಳಿಯ ಬೇಕೆಂದರೆ ಎಲ್ಲೆಯೊಳಗಿನ ಭಾಷೆ ಅಸ್ತಿತ್ವದಲ್ಲಿರಲೇಬೇಕು. ಕನ್ನಡ ಭಾಷೆ ಇಂದು ಇಂಗ್ಲೀಷಿನ ವ್ಯಾಪಕ ಬಳಕೆಯಿಂದಾಗಿ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಪ್ರಬಂಧದಲ್ಲಿ ಕನ್ನಡ ನಾಡ ನುಡಿಯ ರಕ್ಷಣೆ, ಸವಾಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ಕನ್ನಡದ ಬಳಕೆಯ ಬಗ್ಗೆ ಬರೆಯಲಾಗಿದೆ.

ಕನ್ನಡಕರುನಾಡು ಇತ್ತೀಚಿನದೆ?

ಕನ್ನಡ ನುಡಿಯನ್ನು ಆಡುಮಾತಾಗಿ ೨೫೦೦ ವರ್ಷಗಳಿಂದ ಬಳಸಲಾಗುತ್ತಿದೆ. ಕನ್ನಡ ಲಿಪಿ ಮತ್ತು ಬರೆಯುವ ಪದ್ಧತಿ ಸುಮಾರು ೧೯೦೦ ವರ್ಷಗಳ ಹಿಂದೆಯೇ ಇದ್ದಿತು. ಇನ್ನು ಕರುನಾಡು ಯಾವಾಗಿನಿಂದ ಇದೆ ನೀವೆ ಊಹಿಸಿಕೊಳ್ಳಿ. ಹಳೆಯ ಇಂಗ್ಲೀಷ್ ಭಾಷೆ ಸುಮಾರು ಕ್ರಿ.. ೧೦೦೦ ರಲ್ಲಿ ಜನರಿಂದ ಬಳಸಲ್ಪಡುತ್ತಿತ್ತು. ಬರಹದಲ್ಲಿ ಇಂಗ್ಲೀಷ್ ಪ್ರಭುದ್ಧಮಾನಕ್ಕೆ ಬಂದಿದ್ದು ಎಷ್ಟೋ ವರ್ಷಗಳು ಕಳೆದ ಬಳಿಕ. ನಡು ಇಂಗ್ಲೀಷ್ ಕ್ರಿ.. 1400 ರಲ್ಲಿ ಆಡು ಮತ್ತು ಬರಹದ ರೂಪದಲ್ಲಿ ಬಳಸಲ್ಪಟ್ಟಿತು. ಆಧುನಿಕ ಇಂಗ್ಲೀಷ್ ೧೫ ಅಥವಾ ೧೬ ನೆ ಶತಮಾನದಿಂದೀಚೆಗೆ ಬಹುತೇಕ ರಾಷ್ಟ್ರಗಳಲ್ಲಿ ಜನರಿಂದ ವ್ಯವಹಾರಕ್ಕಾಗಿ, ಜ್ಞಾನಕ್ಕಾಗಿ, ತಾಂತ್ರಿಕ ಕಾರಣಗಳಿಗಾಗಿ, ಆಡಳಿತಕ್ಕಾಗಿ, ಮತ್ತು ಪರಸ್ಪರ ಸಂಬಂಧಹೊಂದುವ ಸಲುವಾಗಿ ಬಳಸಲ್ಪಡುತ್ತಿದೆ.
ಕನ್ನಡದ ಬಗ್ಗೆ ಹೇಳುವುದಾದರೆ, ಕನ್ನಡವು ದಕ್ಷಿಣ ಭಾರತದ ಭಾಷೆಗಳ ಮೂಲವೆಂದು ಗುರುತಿಸಲ್ಪಟ್ಟಿರುವ ಮೂಲದ್ರಾವಿಡದಿಂದ ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಅಸಾಧ್ಯ. ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೇರ್ಪಟ್ಟಿತೆಂದು ಹೇಳಲಾಗುತ್ತದೆ.
ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಳೆಯದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತು. ಲಿಪಿಯ ಉಗಮದ ಇತಿಹಾಸವನ್ನು ಗಮನಿಸಿದರೆ, ತಮಿಳಿಗಿಂತಲೂ ಕನ್ನಡದ ಲಿಪಿಯೇ ಮೊದಮೊದಲಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬಂದಂತೆ ಕಾಣಿಸುತ್ತದೆ. ಕುಮುದೇಂದು ಮುನಿ ರಚಿಸಿದ ಸಿರಿಭೂವಲಯಗ್ರಂಥದಲ್ಲಿ ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆ ಎಂದು ಸಾಭೀತುಪಡಿಸಿದ್ದಾರೆ. ಆದರೆ, ಅವರ ಗ್ರಂಥವನ್ನು ಜನ ಸಾಮಾನ್ಯರಿಗೆ ದೊರಕುವ ಹಾಗೆ ಸರ್ಕಾರ ಗಮನಹರಿಸಿಲ್ಲ. ಕನ್ನಡ ವೇದಗಳ ಕಾಲದಿಂದಲೂ ಬಳಕೆಯಲ್ಲಿದ್ದಿತು ಹಾಗೂ ಅದು ನಾಡ ರಕ್ಷಣೆಯ ಸಲುವಾಗಿ ಗುಪ್ತ ಭಾಷೆಯಾಗಿ ಬಳಕೆಯಾಗಿತ್ತೆಂದು ಕೆಲವು ಶಾಸನಗಳಲ್ಲಿ ಉಲ್ಲೇಖವಾಗಿದೆ.

ಈಗ ಕನ್ನಡ

ಪ್ರಪಂಚದಲ್ಲಿ ಅದೆಷ್ಟೋ ಭಾಷೆಗಳು ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಅಂತೆಯೆ ಕನ್ನಡವೂ ಸಹ ಇಂಗ್ಲೀಷ್ ವ್ಯಾಮೋಹಿ ಕನ್ನಡಿಗರಿಂದ ನಿರಾಕರಿಸಲ್ಪಡುತ್ತಿದೆ. ಕನ್ನಡದ ರಕ್ಷಣೆ ಕೇವಲ ಹಳ್ಳಿಗರದು ಎಂಬ ಗೊಡ್ಡು ಮಾತು ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಓದಿದವರ ಹಾಗೂ ಓದುತ್ತಿರುವವರಿಂದ ಹೊರಹೊಮ್ಮುತ್ತಿದೆ. ಕನ್ನಡವನ್ನು ಅನ್ನದ ಭಾಷೆಯಾಗಿಸಲು ಕೇವಲ ಕೆಲವೆ ಜನರು ಪ್ರಯತ್ನಿಸುತ್ತಿದ್ದಾರೆ. ಕನ್ನಡದ ಪರ ಹೋರಾಟಗಾರರು ಎಂದು ಸೋಗು ಹಾಕಿರುವವರು ಕೇವಲ ಚಳುವಳಿಗಳನ್ನು ಮಾತ್ರ ಮಾಡಿಕೊಂಡು ಕನ್ನಡದ ಉಳಿವಿಗೆ ಮಾಡಬೇಕಾದ್ದನ್ನು ಮಾಡದೆ ವ್ಯರ್ಥವಾಗಿ ಇತರರ ಪ್ರಯತ್ನವನ್ನು ಹಾಳು ಗೆಡವುತ್ತಿದ್ದಾರೆ.
೧೯೬೩ರ ಅಕ್ಟೋಬರ್ ೧೦ ರಂದು ಕರ್ನಾಟಕ ರಾಜ್ಯಭಾಷಾ ಅಧಿನಿಯಮವನ್ನು ಸರ್ಕಾರ ಜಾರಿಮಾಡಿತು. ಆದರೆ, ಸಮರ್ಪಕವಾಗಿ ಕನ್ನಡ ಇನ್ನೂ ಆಡಳಿತ ಭಾಷೆಯಾಗಿಲ್ಲ. ಬ್ರಿಟೀಷರುಕನ್ನಡಕ್ಕೆ ನೀಡುತ್ತಿದ್ದ ಆಧ್ಯತೆಯನ್ನು ಇಂದಿನ ಸರ್ಕಾರ ನೀಡುತ್ತಿಲ್ಲ. ವ್ಯವಹಾರಿಕವಾಗಿ ಕನ್ನಡವನ್ನು ಬಳಸುವುದನ್ನು ಜನರು ದಿನದಿಂದ ದಿನಕ್ಕೆ ಕಡಿಮೆಮಾಡುತ್ತಿದ್ದಾರೆ. ಉದ್ಯೋಗದ ಕಾರಣಗಳಿಗಾಗಿ, ಬಹುತೇಕ ಜನರು ಇಂಗ್ಲೀಷನ್ನೆ ಅನ್ನದ ಭಾಷೆಯಾಗಿಸಿಕೊಳ್ಳುತ್ತಿದ್ದಾರೆ.

ಭವಿಷ್ಯದ ಆತಂಕ

ಇಂಗ್ಲೀಷ್ ಜಗತ್ತಿನ ಭಾಷೆಯಾಗಿದ್ದೇ ಇಂಗ್ಲೀಷ್ಗರ ಆಕ್ರಮಣಕಾರಿ ನೀತಿಯಿಂದ. ಮೊದಲು ಅಮೇರಿಕದಲ್ಲಿ ಇಂಗ್ಲೀಷ್ ಭಾಷೆಯೇ ಇರಲಿಲ್ಲ. ಕಾಲಾಂತರದಲ್ಲಿ ಬ್ರಿಟೀಷರ ಅಧಿಕಾರಶಾಹಿ ಹಾಗೂ ವಸಾಹತುಶಾಹಿ ನೀತಿಯಿಂದಾಗಿ ಇಂದು ಅಮೇರಿಕಾದಲ್ಲಿ ಇಂಗ್ಲೀಷ್ ಜನರ ನಾಡಿಯಾಗಿದೆ. ಒಂದು ವೇಳೆ ಕನ್ನಡವನ್ನು ಬಳಸದೇ ಹೋದಲ್ಲಿ ಇಂಗ್ಲೀಷ್ ಭಾಷೆಯೆ ಭವಿಷ್ಯದಲ್ಲಿ ನಮ್ಮ ಭಾಷೆಯಾಗುವ ಮೂಲಕ ನಮ್ಮ ನಾಡು ಬ್ರಿಟನ್ ಅಥವಾ ಅಮೇರಿಕ ದೇಶಗಳರಾಜ್ಯಗಳ ಪಟ್ಟಿಯಲ್ಲಿ ಸೇರುವುದರಲ್ಲಿ ಯಾವ ಸಂಶಯ ಬೇಡ. ನಾಡು ಇಂಗ್ಲೀಷ್ ಮಯವಾದರೆ,ಕನ್ನಡದಲ್ಲಿರುವ ಜನಪದ ಸಾಹಿತ್ಯಗಳನ್ನು ವಸ್ತುಸಂಗ್ರಹಾಲಯಗಳಲ್ಲಿ ನೋಡುವಂತಾಗುತ್ತದೆ.ಈಗಾಗಲೆ, ರೀತಿಯ ಸಾಹಿತ್ಯಗಳು ಕಣ್ಮರೆಯಾಗುತ್ತಿದ್ದು ಪಾಪ್ ಗೀತೆಗಳು ಜನಪದದ ಸ್ಥಾನವನ್ನು ಆಕ್ರಮಿಸುತ್ತಿದೆ.

ರಕ್ಷಣಾತ್ಮಕ ಕಾರ್ಯಗಳು

ನಾಡು ಉಳಿಯಬೇಕೆಂದರೆ ಭಾಷೆ ಉಳಿಯಬೇಕು. ಭಾಷೆ ಉಳಿಯಬೇಕೆಂದರೆ, ನಾವು ಪಡೆದುಕೊಂಡ ಜ್ಞಾನವನ್ನು ಕನ್ನಡಕ್ಕಾಗಿ ಮೀಸಲಿಡಬೇಕು. ನಮ್ಮ ಭಾಷೆ ಮೊದಲು ಕನ್ನಡವಾಗಿ ನಂತರ ಇತರೆ ಭಾಷೆಯಾಗಿರಬೇಕು. ಕನ್ನಡದಲ್ಲಿ ಲಭ್ಯವಿರದ್ದನ್ನು ಲಭ್ಯವಾಗುವ ಹಾಗೆ ನಮ್ಮ ಕೌಶಲ್ಯ ಹಾಗೂ ಸಾಮರ್ಥ್ಯ ರೂಪುಗೊಳ್ಳಬೇಕು. ಇದಕ್ಕಾಗಿ ಕನ್ನಡಿಗರಾದವರು ಅನಿವಾರ್ಯವಾಗಿ ಬೇರೆ ಭಾಷೆಯಲ್ಲಿ ಶಿಕ್ಷಣವನ್ನು ಪಡೆದರೂ ಸಾಮರ್ಥ್ಯವನ್ನು ಗಳಿಸಿದ ಮೇಲೆ ಕನ್ನಡದ ಬಳಕೆಯ ವಿಸ್ತರಣೆಗೆ ಅವಶ್ಯವಿರುವ ಕೆಲಸವನ್ನು ಮಾಡಬೇಕು.
ಉದಾ: ಒಬ್ಬ ವ್ಯಕ್ತಿ ಕಂಪ್ಯೂಟರ್ ಶಿಕ್ಷಣವನ್ನು ಇಂಗ್ಲೀಷ್ ಭಾಷೆಯಲ್ಲಿ ಪಡೆದು ಉದ್ಯೋಗಕ್ಕೆ ಸೇರುವುದು ಅನಿವಾರ್ಯವೇ ಆದರು, ಕನ್ನಡದಲ್ಲಿ ತಾನು ಇಂಗ್ಲೀಷ್ ಭಾಷೆಯಲ್ಲಿ ಪಡೆದ ಕಂಪ್ಯೂಟರ್ ಶಿಕ್ಷಣವನ್ನು ಕನ್ನಡದಲ್ಲೂ ಲಭ್ಯವಾಗುವ ಹಾಗೆ ಆತ ಮಾಡಬೇಕು. 
ಇಂದು ವಿಜ್ಞಾನ, ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಹೆಚ್ಚು ಇಂಗ್ಲೀಷ್ ಭಾಷೆಯೆ ಬಳಕೆಯಾಗುತ್ತಿದೆ. ನಂತರದ ಸ್ಥಾನಗಳಲ್ಲಿ, ಫ್ರೆಂಚ್, ಜರ್ಮನ್, ರಷ್ಯನ್ ಮತ್ತು ಇತರೆ ಭಾಷೆಗಳು ಬಳಸಲ್ಪಡುತ್ತಿದೆ. ನಮ್ಮ ಕನ್ನಡ ಉಳಿಯಬೇಕೆಂದರೆ ನಮ್ಮ ಪ್ರಯತ್ನವು ಸಹ ಕನ್ನಡ ಮುಖಿಯಾಗಿರಬೇಕು. ಸೈನಿಕರು ನಾಡ ರಕ್ಷಣೆಗೆ ದುಡಿದರೆ, ಆಯಾ ಭಾಷಿಕರು ಆಯಾ ಭಾಷೆಯನ್ನು ರಕ್ಷಿಸುವ ಸಲುವಾಗಿ ದುಡಿಯಬೇಕು. ಭಾರತಕರ್ನಾಟಕ ನಿವಾಸಿಯಾಗಿ ಮನಸ್ಸು ಇಂಗ್ಲೀಷ್ ಆಗಿರಬಾರದು. ಬದಲಾಗಿ ನಾಡ ನಿವಾಸಿಯಾಗಿ ಕನ್ನಡ ಮನಸ್ಸಾಗಿರಬೇಕು. ಬೇರೆ ಭಾಷೆಗಳನ್ನು ಗೌರವಿಸಬೇಕು ಹಾಗು ನಮ್ಮನ್ನು ನಾವು ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ತಾಂತ್ರಿಕವಾಗಿ, ಸಾಹಿತ್ಯಾತ್ಮಕವಾಗಿ, ಆಡಳಿತಾತ್ಮಕವಾಗಿ, ಹೀಗೆ ಮುಂತಾದ ಕ್ಷೇತ್ರಗಳಲ್ಲಿ ಕನ್ನಡ ನಾಡನುಡಿಯ ಉಳಿವಿಗಾಗಿ ತೊಡಗಿಸಿಕೊಳ್ಳಬೇಕು.

ಕೊನೆಯ ಮಾತು

ಕಣ್ಣಿಗೆ ಕಾಡಿಗೆ ಬೇಕುಕಾಡಿಗೆ ಮರ-ಗಿಡ-ಬಳ್ಳಿ, ಪ್ರಾಣಿ-ಪಕ್ಷಿ ಬೇಕು ಮರ-ಗಿಡ-ಬಳ್ಳಿ, ಪ್ರಾನಿ-ಪಕ್ಷಿಗಳಿಗೆ ನೀರು-ಗಾಳಿ-ಬೆಳಕು ಬೇಕು ನೀರು-ಗಾಳಿ-ಕಾಡು-ನೆಲದ ರಕ್ಷಣೆಗೆ ಮಾನವನ ಪರಿಸರಾತ್ಮಕ ಬದುಕು ಬೇಕು ನಮ್ಮಅಭಿವ್ಯಕ್ತಿ-ಸಾಂಸ್ಕೃತಿಕ-ಆಡಳಿತ-ಸಾಹಿತ್ಯ-ತಾಂತ್ರಿಕ ಜ್ಞಾನ ಹೀಗೆ ಮುಂತಾದ ಆತ್ಮಕವುಗಳಿಗೆ ಏನು ಬೇಕು? ‘ಕನ್ನಡ ನಾಡ ನುಡಿಎಂಬ ಆತ್ಮ ಬೇಕು.




ಕನ್ನಡ ನಾಡು ನುಡಿಯ ಹೆಸರನ್ನು ದೇಶ ವಿದೇಶಗಳಿಗೆ ಎತ್ತಿಹಿಡಿದು ಸಾಧನೆ ಗೈದ ಸಾಧಕರು.


ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರು             




ಕನ್ನಡ ಕವಿಗಳು    

    ಸಮಂತ ಭದ್ರ·
ಶಿವಕೋಟ್ಯಾಚಾರ್ಯ·
ಪಂಪ·
ರನ್ನ·
ಪೊನ್ನ·
ಜನ್ನ·
ಪುಲಿಗೆರೆ ಸೋಮನಾಥ·
ಮಧುರ ಚೆನ್ನ·
ಹರಿಹರ (ಕವಿ)·
ರಾಘವಾಂಕ·
ಲಕ್ಷ್ಮೀಶ·
ಕುಮಾರವ್ಯಾಸ·
ನಯಸೇನ·
ಶಾ೦ತಕವಿ·
ಭೀಮಕವಿ·
ಅಸಗ·
ಗುಣನಂದಿ·
ಕೇಶಿರಾಜ·
ಜೇಡರ ದಾಸಿಮಯ್ಯ·
ವಾದಿರಾಜರು·
ಪುರ೦ದರದಾಸ·
ಕನಕದಾಸ·
ಬಸವಣ್ಣ·
ಅಕ್ಕಮಹಾದೇವಿ·
ಅಲ್ಲಮಪ್ರಭು·
ಸರ್ವಜ್ಞ·
ಸಂಚಿ ಹೊನ್ನಮ್ಮ·
ಸಿಂಗರಾರ್ಯ·
ಆನಂದಕಂದ·
ಭಟ್ಟಾಕಳಂಕ·
ನಾಗವರ್ಮ-೧·
ನಾಗವರ್ಮ-೨·
ಗೋವಿಂದ ಪೈ·
ಆಲೂರುವೆಂಕಟರಾಯರು·
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆ೦ಪು)·
ದ.ರಾ.ಬೇಂದ್ರೆ·
ಮಾಸ್ತಿ·
ಶಿವರಾಮ ಕಾರ೦ತ·
ವಿ.ಕೃ.ಗೋಕಾಕ್·
ಯು.ಆರ್.ಅನಂತಮೂರ್ತಿ·
ಗಿರೀಶ್ ಕಾರ್ನಾಡ್·
ಚಂದ್ರಶೇಖರ ಕಂಬಾರ·
ಜಿ.ಪಿ.ರಾಜರತ್ನಂ·
ಮಹಾದೇವಿವರ್ಮಾ·
ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ·
ಡಿ.ಜೆ.ಮಂಜುನಾಥ್·
ಗೊರೂರು ರಾಮಸ್ವಾಮಿ ಐಯ್ಯಂಗಾರ·
ಚಂದ್ರಶೇಖರ ಪಾಟೀಲ·
ಡಿ.ವಿ.ಜಿ·
ಶಿಶುನಾಳ ಶರೀಫ·
ಆರ್.ಸಿ ಹಿರೇಮಠ·
ಕೆ.ಎಸ್.ನಿಸಾರ್ ಅಹಮದ್·
ಡಿ.ಎಲ್.ನರಸಿಂಹಾಚಾರ್·
ಪು.ತಿ.ನರಸಿಂಹಾಚಾರ್·
ಕೆ.ಎಸ್.ನರಸಿಂಹಸ್ವಾಮಿ·
ಕೊಡಗಿನ ಗೌರಮ್ಮ·
ತ್ರಿವೇಣಿ·
ಅ.ನ.ಕೃಷ್ಣರಾಯ·
ಬಿ.ಎಂ.ಶ್ರೀಕಂಠಯ್ಯ·
ಬಿ. ಜಿ. ಎಲ್. ಸ್ವಾಮಿ·
ಎಸ್.ಎಲ್.ಭೈರಪ್ಪ·
ಪೂರ್ಣಚಂದ್ರ ತೇಜಸ್ವಿ·
ಪಿ.ಲಂಕೇಶ್·
ಎಂ.ಕೆ.ಇಂದಿರ·
ಆರ್ಯಾಂಬಪಟ್ಟಾಭಿ·
ವಾಣಿ·
ಮಂಗಳಾಸತ್ಯನ್·
ಉಷಾನವರತ್ನರಾಮ್·
ಅನುಪಮಾನಿರಂಜನ·
ಸಾ ರ ಅಬೂಬಕ್ಕರ್·
ಹೆಚ್.ಜಿ.ರಾಧಾದೇವಿ·
ಕಮಲಾ ಹಂಪನಾ·
ಶ್ರೀನಿವಾಸ ವೈದ್ಯ

                                        

ಕನ್ನಡ ಸಾಹಿತಿಗಳು


  ·        .ನಾ.ಪ್ರಹ್ಲಾದರಾವ್·         ಅರವಿಂದ ಮಾಲಗತ್ತಿ·         ಅಶೋಕ್ ಕುಮಾರ್ (ವ್ಯಂಗ್ಯ ಚಿತ್ರಕಾರ)·         .ಕೆ.ರಾಮಾನುಜನ್·        ಎಂಆರ್ದತ್ತಾತ್ರಿ·        ಎಂಹೆಗಡೆ·        ಎಂಎಸ್ಪ್ರಭಾಕರ·        ಎಚ್ಆರ್ರಾಮಕೃಷ್ಣ ರಾವ್·        ಎಚ್.ಆರ್.ಚಂದ್ರಶೇಖರ್·        ಎನ್.ನರಸಿಂಹಯ್ಯ·        ಎಸ್ರಾಮಸ್ವಾಮಿ·        ಎಸ್.ಕೃಷ್ಣಸ್ವರ್ಣಸಂದ್ರ·         ಸೇಸುನಾಥನ್·        ಕಡವ ಶಂಭುಶರ್ಮ·        ಕರಸ್ಥಲ ನಾಗಿದೇವ·        ಕರ್ಪೂರ ಶ್ರೀನಿವಾಸರಾವ್·        ಕುವೆಂಪು·        ಕುಸುಮಾಕರ ದೇವರಗೆಣ್ಣೂರು·        ಕೃಷ್ಣಾನಂದ ಕಾಮತ್·        ಕೆಎಸ್ಭಗವಾನ್·         ಕೆವೆಂಕಟರಾಮಪ್ಪ·        ಕೆವೈನಾರಾಯಣಸ್ವಾಮಿ·        ಕೆ.ಗೋವಿಂದರಾಜು·         ಗಳಗನಾಥ·         ಗಿರೀಶ್ ರಾವ್ ಹತ್ವಾರ್·        ಗುರುದೇವಿ ಹುಲೆಪ್ಪನವರಮಠ·        ಗುರುರಾಜ ಬೆಣಕಲ್·         ಜಿ.ಎಸ್.ಶಿವರುದ್ರಪ್ಪ·        ಜಿ.ಟಿ.ನಾರಾಯಣ ರಾವ್·        ಟಿಆರ್ಅನಂತರಾಮು·        ಟಿ.ಎನ್.ಮಹಾದೇವಯ್ಯ·         ಡಾಭದ್ರಾವತಿ ರಾಮಾಚಾರಿ·        ಡಿ.ಎನ್.ಶಂಕರ ಬಟ್·        ತೀ ನಂ ಶ್ರೀ·        .ರಾ.ಬೇಂದ್ರೆ·        ಎಚ್.ವಿ.ನಂಜುಂಡಯ್ಯ·        ನೀರ್ಪಾಜೆ ಭೀಮಭಟ್ಟ ·        ನುಗ್ಗೇಹಳ್ಳಿ ಪಂಕಜ·        ನೇಮಿಚಂದ್ರ (ಲೇಖಕಿ)·        ಪದ್ಮಾ ಕೃಷ್ಣಮೂರ್ತಿ·        ಪುರಂದರದಾಸರು·        ಪುರುಷೋತ್ತಮ ಬಿಳಿಮಲೆ·        ಪೂರ್ಣಚಂದ್ರ ತೇಜಸ್ವಿ·        ಪ್ರಕಾಶ ಖಾಡೆ·        ಫೆರ್ಡಿನೆಂಡ್ ಕಿಟೆಲ್·        ಬನ್ನೂರು ಕೆರಾಜು·        ಬಾಲಸುಬ್ರಹ್ಮಣ್ಯ ಕಂಜರ್ಪಣೆ·        ಬಿಜಿಎಲ್ಸ್ವಾಮಿ·        ಬಿ.ತಿಪ್ಪೇರುದ್ರಪ್ಪ·        ಬೆನಗಲ್ ರಾಮರಾವ್·        ಮಲ್ಲಿಕಾ ಕಡಿದಾಳ್ ಮಂಜಪ್ಪ·        ಮಹೇಶ್ವರಪ್ಪ·        ಮಾನ್ವಿ ನರಸಿಂಗರಾವ್·        ಯುಬಿಪವನಜ·        ವಿಕಿಪೀಡಿಯ:ಯೋಜನೆ/ಕನ್ನಡ ಸಾಹಿತ್ಯ ಚರಿತ್ರೆ·        ಎಚ್ಕೆರಂಗನಾಥ್·        ರಾಘವೇಂದ್ರ ಇಟಗಿ·        ರಾಘವೇಂದ್ರ ಖಾಸನೀಸ·        ರಾಘವೇಂದ್ರ ಪಾಟೀಲ್·        ರಾಮಚಂದ್ರದೇವ·        ಲೀಲಾ ಪ್ರಕಾಶ್·        ವಸಂತ ಅನಂತ ದಿವಾಣಜಿ·        ವಸುಧೇಂದ್ರ·        ವಾದಿರಾಜರು·        ವಾಸುದೇವಮೂರ್ತಿ·        ವಿಮುನಿವೆಂಕಟಪ್ಪ·        ವೈದೇಹಿ·        ಶಿಶುನಾಳ ಶರೀಫರು·        ಎಲ್ಎಸ್ಶೇಷಗಿರಿ ರಾವ್·        ಶೈಲಜಾ ಉಡಚಣ·        ಬಿ.ಎಂ.ಶ್ರೀಕಂಠಯ್ಯ·        ಸರಸ್ವತಿಬಾಯಿ ರಾಜವಾಡೆ·        ಸರಿತಾ ಕುಸುಮಾಕರ ದೇಸಾಯಿ·        ಸಾರಾ ಅಬೂಬಕರ್·        ಸಿ.ಪಿಕೃಷ್ಣಕುಮಾರ್·        ಎನ್.ಎಸ್.ಸುಬ್ಬರಾವ್·        ಸೋಸಲೆ ಅಯ್ಯಾಶಾಸ್ತ್ರಿ


ಜ್ಞಾನಪೀಠ ಪ್ರಶಸ್ತಿ


ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು

  ·        ಅನಿತಾ ದೇಸಾಯಿ·        ಅಮೃತ ಪ್ರೀತಮ್·        ಆಚಾರ್ಯ ಕಾಲೇಕರ್·        ಆಶಾಪೂರ್ಣ ದೇವಿ·        ಇರಾವತಿ ಕರ್ವೆ·        ಉಮಾಶಂಕರ ಜೋಷಿ·        ಉಮಾಶಂಕರ್ ಜೋಶಿ·        .ಆರ್.ಕೃಷ್ಣಶಾಸ್ತ್ರಿ·        .ಎನ್.ಮೂರ್ತಿರಾವ್·        ಎಂ. ಎಂ. ಕಲಬುರ್ಗಿ·        ಎಂ.ಎಂ.ಕಲ್ಬುರ್ಗಿ·        ಎಚ್. ತಿಪ್ಪೇರುದ್ರಸ್ವಾಮಿ·        ಎಮ್. ಶಿವರಾಮ್·        ಎಮ್.ಎಮ್.ಕಲಬುರ್ಗಿ·        ಎಸ್.ಎಲ್. ಭೈರಪ್ಪ·        ಎಸ್.ಎಸ್.ಭೂಸನೂರಮಠ·        ಎಸ್.ವಿ.ರಂಗಣ್ಣ·        ಕೀರ್ತಿನಾಥ ಕುರ್ತಕೋಟಿ·        ಕುವೆಂಪು·        ಕುಸುಮಾಗ್ರಜ್·        ಕೆ.ಎಸ್.ನರಸಿಂಹಸ್ವಾಮಿ·        ಕೆ.ಎಸ್.ನಿಸಾರ್ ಅಹಮದ್·        ಕೆ.ವಿ.ಸುಬ್ಬಣ್ಣ·        ಕೇಂದ್ರ ಸಾಹಿತ್ಯ ಅಕಾಡೆಮಿ·        ಗೀತಾ ನಾಗಭೂಷಣ·        ಗೊರೂರು ರಾಮಸ್ವಾಮಿ ಅಯ್ಯಂಗಾರ್·        ಗೋಪಾಲಕೃಷ್ಣ ಅಡಿಗ·        ಚಂದ್ರಶೇಖರ ಕಂಬಾರ·        ಚದುರಂಗ·        ಚನ್ನವೀರ ಕಣವಿ·        ಜಿ.ಎಸ್.ಆಮೂರ·        ಟಿ. ಶಿವಶಂಕರ ಪಿಳ್ಳೈ·        ಡಿ.ಆರ್. ನಾಗರಾಜ್·        ಡಿ.ವಿ.ಗುಂಡಪ್ಪ·        .ರಾ.ಸುಬ್ಬರಾಯ·        ದೇವನೂರು ಮಹಾದೇವ·        ದೇವುಡು ನರಸಿಂಹಶಾಸ್ತ್ರಿ·        ನಿಲಿನ ಅಬ್ರಹಾಂ·        ಪಿ.ಲಂಕೇಶ್·        ಪು.ತಿ.ನರಸಿಂಹಾಚಾರ್·        ಪೂರ್ಣಚಂದ್ರ ತೇಜಸ್ವಿ·        ಫಿರಾಕ್ ಗೋರಕ್ ಪುರಿ·        ಬಿ. ಜಿ. ಎಲ್. ಸ್ವಾಮಿ·        ಬಿ. ಪುಟ್ಟಸ್ವಾಮಯ್ಯ·        ಬಿ.ಸಿ.ರಾಮಚಂದ್ರ ಶರ್ಮ·        ಭಾಲಚಂದ್ರ ನೆಮಾಡೆ·        ಮಾಸ್ತಿ ವೆಂಕಟೇಶ ಅಯ್ಯಂಗಾರ್·        ಯಶವಂತ ಚಿತ್ತಾಲ·        ರಂ.ಶ್ರೀ.ಮುಗಳಿ·        ರಘುವೀರ್ ಚೌಧರಿ·        ರಹಮತ್ ತರೀಕೆರೆ·        ವಿ.ಸೀತಾರಾಮಯ್ಯ·        ವಿನಾಯಕ ಕೃಷ್ಣ ಗೋಕಾಕ·        ವಿಷ್ಣು ಸಖಾರಾಮ್ ಖಾಂಡೇಕರ್·        ವೈದೇಹಿ·        ವ್ಯಾಸರಾಯ ಬಲ್ಲಾಳ·        ಶಂ.ಬಾ. ಜೋಷಿ·        ಶಂಕರ ಮೊಕಾಶಿ ಪುಣೇಕರ·        ಶಂಕರ್ ಮೊಕಾಶಿ ಪುಣೇಕರ್·        ಶಾಂತಿನಾಥ ದೇಸಾಯಿ·        ಶಿವರಾಮ ಕಾರಂತ·        ಎಲ್. ಎಸ್. ಶೇಷಗಿರಿ ರಾವ್·        ಶ್ರೀರಂಗ·        ಸು.ರಂ.ಎಕ್ಕುಂಡಿ·        ಸುಜನಾ (ಎಸ್. ನಾರಾಯಣ ಶೆಟ್ಟಿ)·        ಹಾ.ಮಾ.ನಾಯಕ


ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು

  ·        ಎಸ್.ನಿಜಲಿಂಗಪ್ಪ·        ಕರ್ನಾಟಕ ರತ್ನ·        ಕುವೆಂಪು·        ಭೀಮಸೇನ ಜೋಷಿ·        ರಾಜ್ಕುಮಾರ್·        ವೀರೇಂದ್ರ ಹೆಗ್ಗಡೆ·        ಶ್ರೀ ಶಿವಕುಮಾರ ಸ್ವಾಮಿಗಳು·        ಸಿಎನ್ಆರ್ರಾವ್
ಪಂಪ ಪ್ರಶಸ್ತಿ ಪುರಸ್ಕೃತರು·        .ಎನ್.ಮೂರ್ತಿರಾವ್·        ಎಂಎಂಕಲಬುರ್ಗಿ·        ಎಲ್ಬಸವರಾಜು·        ಎಸ್.ಎಲ್ಭೈರಪ್ಪ·        ಕಯ್ಯಾರ ಕಿಞ್ಞಣ್ಣ ರೈ·        ಕುವೆಂಪು·        ಕೆ.ಎಸ್.ನರಸಿಂಹಸ್ವಾಮಿ·        ಗೋಪಾಲಕೃಷ್ಣ ಅಡಿಗ·        ಚಂದ್ರಶೇಖರ ಕಂಬಾರ·        ಚಂದ್ರಶೇಖರ ಪಾಟೀಲ·        ಚನ್ನವೀರ ಕಣವಿ·        ಚಿದಾನಂದ ಮೂರ್ತಿ·        ಜಿ.ಎಚ್.ನಾಯಕ·        ಜಿ.ಎಸ್.ಶಿವರುದ್ರಪ್ಪ·        ಡಿಎನ್ಶಂಕರ ಭಟ್ಟ·        ತೀ ನಂ ಶ್ರೀ·        ದೇಜವರೇಗೌಡ·        ಪು.ತಿ.ನರಸಿಂಹಾಚಾರ್·        ಪೂರ್ಣಚಂದ್ರ ತೇಜಸ್ವಿ·        ಬರಗೂರು ರಾಮಚಂದ್ರಪ್ಪ·        ಯಶವಂತ ಚಿತ್ತಾಲ·        ಶಿವರಾಮ ಕಾರಂತ·        ಸೇಡಿಯಾಪು ಕೃಷ್ಣಭಟ್ಟ
ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು·        ಆಶಾ ಭೋಂಸ್ಲೆ·        ಮಹಾಶ್ವೇತಾ ದೇವಿ·        ಎಂ.ಎಫ್ಹುಸೇನ್·        ಕೃಷ್ಣಸ್ವಾಮಿ ಕಸ್ತೂರಿರಂಗನ್·        ಬಿರ್ಜೂ ಮಹಾರಾಜ್·        ಲಕ್ಷ್ಮಿ ಮಿತ್ತಲ್·        ರಾಜೇಂದ್ರ ಕೆಪಚೌರಿ·        ಅಮೃತಾ ಪ್ರೀತಮ್·        ಉದಯ ಶಂಕರ್·        ಅಜಿಮ್ ಪ್ರೇಮ್ಜಿ·        ಅಟಲ್ ಬಿಹಾರಿ ವಾಜಪೇಯಿ·        ಅಡೂರು ಗೋಪಾಲಕೃಷ್ಣನ್·        ಅನಿಲ್ ಕಾಕೋಡ್ಕರ್·        ಅಮೃತ ಪ್ರೀತಮ್·        ಅಮ್ಜದ್ ಅಲಿ ಖಾನ್·        ಅಲಿ ಅಕ್ಬರ್ ಖಾನ್·        ಅಲ್ಲಾವುದ್ದೀನ್ ಖಾನ್·        ಆಚಾರ್ಯ ಕಾಲೇಕರ್·        ಆರ್.ಕೆ.ನಾರಾಯಣ್·        ಆರ್.ಕೆ.ಲಕ್ಷ್ಮಣ್·        ಶ್ರೀಧರನ್·        ಉಮಾ ಶಂಕರ ದೀಕ್ಷಿತ್·        .ಪಿ.ಜೆ.ಅಬ್ದುಲ್ ಕಲಾಂ·        ಎಂಬಾಲಮುರಳಿ ಕೃಷ್ಣ·        ಎಂ.ಎಸ್.ಸುಬ್ಬುಲಕ್ಷ್ಮಿ·        ಎಡ್ಮಂಡ್ ಹಿಲರಿ·        ಎನ್ ಆರ್ ನಾರಾಯಣಮೂರ್ತಿ·        ಎಮ್.ಎಸ್.ಸ್ವಾಮಿನಾಥನ್·        ಎಲ್ಕೆಅಡ್ವಾಣಿ·        ಕಮಲಾದೇವಿ ಚಟ್ಟೋಪಾಧ್ಯಾಯ·        ಕಿಶೋರಿ ಅಮೋನ್ಕರ್·        ಕುಮಾರ ಗಂಧರ್ವ·        ಕುವೆಂಪು·        ಕೆ.ಜೆ.ಜೇಸುದಾಸ್·        ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್·        ಖುಷ್ವಂತ್ ಸಿಂಗ್·        ಗಂಗೂಬಾಯಿ ಹಾನಗಲ್·        ಗುಲ್ಜಾರಿ ಲಾಲ್ ನಂದಾ·        ಜಯಂತ ನಾರ್ಳಿಕರ್·        ಜಿಮಾಧವನ್ ನಾಯರ್·        ಜಿಗ್ಮೆ ದೋರ್ಜಿ ವಾಂಗ್ಚುಕ್·        ಜುಬಿನ್ ಮೆಹ್ತಾ·        ಜೆ.ಆರ್.ಡಿಟಾಟ·        ಟಿಏನ್ಚತುರ್ವೇದಿ·        ಡಿಕೆಪಟ್ಟಮ್ಮಾಳ್·        ದಿಲೀಪ್ ಕುಮಾರ್ (ಚಿತ್ರ ನಟ)·        ಧರ್ಮವೀರ·        ಧೊಂಡೊ ಕೇಶವ ಕರ್ವೆ·        ನಂದಲಾಲ್ ಬೋಸ್·        ನಾನಾಜಿ ದೇಶಮುಖ್·        ನಾನಿ ಪಾಲ್ಖಿವಾಲಾ·        ನಾರ್ಮನ್ ಬೊರ್ಲಾಗ್·        ಪಂಡಿತ್ ಜಸರಾಜ್·        ಪಂಡಿತ್ ರವಿಶಂಕರ್·        ಪ್ರಶಾಂತ ಚಂದ್ರ ಮಹಲನೋಬಿಸ್·        ಬಾಬಾ ಅಮ್ಟೆ·        ಬಾಲಸರಸ್ವತಿ·        ಬಿಕೆಎಸ್ಐಯ್ಯಂಗಾರ್·        ಬಿಸ್ಮಿಲ್ಲಾ ಖಾನ್·        ಭೀಮಸೇನ ಜೋಷಿ·        ಭೂಪೇನ್ ಹಝಾರಿಕಾ·        ಮನಮೋಹನ್ ಸಿಂಗ್·        ಮಲ್ಲಿಕಾರ್ಜುನ ಮನ್ಸೂರ್·        ಮಹಾದೇವಿ ವರ್ಮಾ·        ಯಾಮಿನಿ ಕೃಷ್ಣಮೂರ್ತಿ·        ಯುಆರ್ರಾವ್·        ರಘುನಾಥ್ ಮಶೇಲ್ಕರ್·        ರತನ್ ನಾವಲ್ ಟಾಟಾ·        ರಾಜಾ ರಾವ್·        ರಾಜಾರಾಮಣ್ಣ·        ರಾಮ ನಾರಾಯಣ·        ರೊದ್ದಂ ನರಸಿಂಹ·        ಲತಾ ಮಂಗೇಶ್ಕರ್·        ವರ್ಗೀಸ್ ಕುರಿಯನ್·        ವಿಕೆಆರ್ವಿ ರಾವ್·        ವಿಜಯಲಕ್ಶ್ಮೀ ಪಂಡಿತ್·        ವಿಶ್ವನಾಥನ್ ಆನಂದ್·        ವೀರೇಂದ್ರ ಹೆಗ್ಗಡೆ·        ಶಿವಕುಮಾರ್ ಶರ್ಮಾ·        ಶಿವಾಜಿ ಗಣೇಶನ್·        ಸಚಿನ್ ತೆಂಡೂಲ್ಕರ್·        ಸತೀಶ್ ಧವನ್·        ಸತ್ಯಜಿತ್ ರೇ·        ಸಲೀಂ ಅಲಿ·        ಸಿಎನ್ಆರ್ರಾವ್·        ಸೀತಾಕಾಂತ್ ಮಹಾಪಾತ್ರ·        ಸುಬ್ರಹ್ಮಣ್ಯನ್ ಚಂದ್ರಶೇಖರ್·        ಸೆಮ್ಮ೦ಗುಡಿ ಶ್ರೀನಿವಾಸ ಅಯ್ಯರ್·        ಸೋನಾಲ್ ಮಾನ್ಸಿಂಗ್·        ಹರಗೋಬಿಂದ ಖುರಾನ·        ಹರಿಪ್ರಸಾದ್ ಚೌರಾಸಿಯಾ·        ಹೃಷಿಕೇಶ್ ಮುಖರ್ಜಿ·        ಹೋಮಿ ಸೇತ್ನಾ


  ·        ದೇವ್ ಆನಂದ್·        ಮುಲ್ಕ್ರಾಜ್ಆನಂದ್‌‌·        ರುಕ್ಮಿಣಿದೇವಿ ಅರುಂಡೇಲ್·        ಯಶ್ ಚೋಪ್ರಾ·        ಕೆ. ಕೆ. ಹೆಬ್ಬಾರ್·        ಎಂ.ಎಫ್. ಹುಸೇನ್·        ಪೃಥ್ವಿರಾಜ್ಕಪೂರ್·        ರಾಜ್ ಕಪೂರ್·        ರಾಮನಾಥನ್ ಕೃಷ್ಣನ್·        ತೈಯಬ್ ಮೆಹ್ತಾ·        ಇಸ್ಮಾಯಿಲ್ಮರ್ಚೆಂಟ್·        ಸುನಿಲ್ ಭಾರತಿ ಮಿತ್ತಲ್·        ರಾಜೇಂದ್ರ ಕೆ. ಪಚೌರಿ·        ಲಿಯಾಂಡರ್ಪೇಸ್·        ಎಸ್.ಎಚ್. ರಾಝಾ·        ಮಲ್ಲಿಕಾ ಸಾರಾಭಾಯ್·        ಮೃಣಾಲ್ಸೇನ್·        ನಸೀರುದ್ದೀನ್ ಷಾ·        ಜಗಜಿತ್ ಸಿಂಗ್·        ಎಲ್. ಸುಬ್ರಮಣ್ಯಂ·        ಅಣ್ಣಾ ಹಜಾರೆ·        ಅನಿಲ್ ಕಾಕೋಡ್ಕರ್·        ಅಶೋಕ್ ಕುಮಾರ್·        ಆದಿ ಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ·        ಆರ್.ಕೆ.ಲಕ್ಷ್ಮಣ್·        ಇಳಾ ಭಟ್·        . ಆರ್. ರಹಮಾನ್·        . ಕೆ. ಹಂಗಲ್·        ಎನ್ ಶೇಷಗಿರಿ·        ಎಮ್. ವಿ. ಕಾಮತ್·        ಕುಂದಾಪುರ ವಾಮನ ಕಾಮತ್·        ಕುರ್ರಾತುಲೈನ್ ಹೈದರ್·        ಕುವೆಂಪು·        ಕೇಸರ್ ಬಾಯಿ ಕೇರ್ಕರ್·        ಕೇಸರ್ಬಾಯಿ ಕೇರ್ಕರ್·        ಖುಷ್ವಂತ್ ಸಿಂಗ್·        ಗಂಗೂಬಾಯಿ ಹಾನಗಲ್·        ಗಿರಿಜಾ ದೇವಿ·        ಗೋಪಿನಾಥ್ ಮೊಹಾಂತಿ·        ಚೆಂಬೈ ವೈದ್ಯನಾಥ ಭಾಗವತರು·        ಜಾಕಿರ್ ಹುಸೇನ್ (ಸಂಗೀತಗಾರ)·        ಡಿ. ಕೆ. ಪಟ್ಟಮ್ಮಾಳ್·        ಡಿ. ಜಯಕಾಂತನ್·        ಡಿ. ಸಿ. ಪಾವಟೆ·        ಡಿ.ವಿ.ಗುಂಡಪ್ಪ·        ಪಂ. ವಿ. ಜಿ. ಜೊಗ್·        ಪದ್ಮಾ ಸುಬ್ರಹ್ಮಣ್ಯಂ·        ಪುಟ್ಟರಾಜ ಗವಾಯಿಗಳು·        ಪುಲ್ಲೇಲ ಗೋಪಿಚಂದ್·        ಪ್ರಭಾ ಅತ್ರೆ·        ಬಿಸ್ಮಿಲ್ಲಾ ಖಾನ್·        ಭೀಮಸೇನ ಜೋಷಿ·        ಮನ್ನಾಡೆ·        ಮಲ್ಲಿಕಾರ್ಜುನ ಮನ್ಸೂರ್·        ಮುರಿಗೆಪ್ಪ ಚನ್ನವೀರಪ್ಪ ಮೋದಿ·        ಮೃಣಾಲಿನಿ ಸಾರಾಭಾಯ್·        ಯು. ಆರ್. ರಾವ್·        ಲತಾ ಮಂಗೇಶ್ಕರ್·        ವಿಕ್ರಮ್ ಸಾರಾಭಾಯಿ·        ವಿಷ್ಣು ಸಖಾರಾಮ್ ಖಾಂಡೇಕರ್·        ವೀರೇಂದ್ರ ಹೆಗ್ಗಡೆ·        ಶಿವಕುಮಾರ್ ಶರ್ಮಾ·        ಶ್ಯಾಮ್ ಬೆನಗಲ್·        ಶ್ರೀ ಲಾಲ್ ಶುಕ್ಲ·        ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ·        ಸತ್ಯವ್ರತ ಶಾಸ್ತ್ರಿ·        ಸಿ. ಕೆ. ಪ್ರಹಲಾದ್·        ಸಿ. ನಾರಾಯಣ ರೆಡ್ಡಿ·        ಸೀತಾಕಾಂತ್ ಮಹಾಪಾತ್ರ·        ಹೀರಾಬಾಯಿ ಬಡೋದೆಕರ·        ಹೆಚ್ ನರಸಿಂಹಯ್ಯ


ಕನ್ನಡ ಕವಿಗಳು ವಿಡಿಯೋ

➽➽➽➽➽➽➽➽➽➽➽➽➽➽➽➽➽➽➽

ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟ ವೀಡಿಯೋಗಳು
















➽➽➽➽➽➽➽➽➽➽➽➽➽➽➽➽➽➽➽


5 comments:

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    jayakumarcsj@gmail.com

    ReplyDelete
  2. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    jayakumarcsj@gmail.com

    ReplyDelete
  3. Niminda ವಿದ್ಯಾರ್ಥಿಗಳಿಗೆ thumba help agide thankyou

    ReplyDelete
  4. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    jayakumarcsj@gmail.com

    ReplyDelete